ಶಿರಾ ಶಿಕ್ಷಕಿಯರಿಂದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ದಿನಾಂಕ 3.1.2026 ರಂದು ಸಿರಾ ನಗರದ ರಂಗನಾಥ ಕಾಲೇಜು ಆವರಣದಲ್ಲಿನ ಕುಂಚಶ್ರೀ ಪ್ಯಾಲೇಸ್ ನಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ದಿನಾಚರಣೆ ನೆಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ಶಾಸಕರು, ದೆಹಲಿಯ ವಿಶೇಷ ಪ್ರತಿನಿಧಿ ಗಳಾದ ಶ್ರೀ ಟಿ ಬಿ ಜಯಚಂದ್ರರವರು ಉದ್ಘಾಟನೆ ಮಾಡಿದರು.


ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಬೇಕು. ಎಲ್ಲಾ ರಂಗದಲ್ಲಿ ಮೀಸಲಾತಿ ನೀಡಬೇಕು, ಸಮಾನ ಆದ್ಯತೆ ನೀಡಬೇಕು.ದೇಶದ ಪರಿವರ್ತನೆಯಲ್ಲಿ ಹೆಣ್ಣುಮಕ್ಕಳ ಪಾತ್ರ ಅತೀ ದೊಡ್ಡದು ಎಂದು ಮಹಿಳೆಯರ ಪಾತ್ರದ ಬಗ್ಗೆ ಅಪಾರ ಕಾಳಜಿ ತೋರಿದ್ದಾರೆ. ಅಲ್ಲದೇ ತಾಲೂಕಿನ ಸಾವಿತ್ರಿ ಬಾಯಿ ಫುಲೆ ಸಂಘದ ಬೇಡಿಕೆಗೆ ಸ್ಪಂದಿಸಿದ ಸರ್ಕಾರದ ವತಿಯಿಂದ ಒಂದು ಎಕರೆ ಜಮೀನು ಮಂಜೂರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.


ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನವರು ನಮ್ಮ ಸಂಘ ಕೇವಲ ಸಂಘ ಅಲ್ಲ ಅದು ಒಂದು ಶಕ್ತಿ. ಇಂದು  ರಾಷ್ಟ್ರದಾದ್ಯಂತ ನಮ್ಮ ಸಂಘಟನೆ ವ್ಯಾಪಿಸಿದೆ. ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮತ್ತು ನಮ್ಮೆಲ್ಲರ ಹೆಮ್ಮೆಯ ಧೀಮಂತ ನಾಯಕಿ ಡಾ.ಲತಾ ಎಸ್ ಮುಳ್ಳೂರ ರವರ ದಿಟ್ಟ  ನಾಯಕತ್ವವೇ ಇದಕೆಲ್ಲ ಮೂಲ ಕಾರಣ ಎಂದು ತಿಳಿಸಿದರು.


ತರಗತಿಯಲ್ಲಿ ಇನ್ನೊವೇಟಿವ್ ಬೋಧನ ಕೌಶಲ್ಯದೊಂದಿಗೆ ಶಾಲಾ ಕರ್ತವ್ಯ ನಿರ್ವಹಿಸುತ್ತಿರುವ ಉತ್ತಮ ಶಿಕ್ಷಕಿಯರನ್ನು  ತಾಲೂಕಿನ ತಲಾ 34 ಕ್ಲಸ್ಟರ್  ಗೆ ಒಬ್ಬರಂತೆ ಗುರುತಿಸಿ ಸನ್ಮಾನಿಸಲಾಯಿತು


ತಾ.ಅಧ್ಯಕ್ಷರಾದ ಶ್ರೀಮತಿ ಜಗದಾಂಬ ಮಾತನಾಡಿ  ಮಾತೆ ಸಾವಿತ್ರಿ ಬಾಯಿ ಫುಲೆ ಯವರ ಜೀವನದ ಸಾಧನೆ ಕುರಿತು ಸ್ಮರಿಸಿ ಅವರ ಆದರ್ಶಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಸಮಾಜಮುಖಿ ಸೇವೆಗಳಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ. ತಾ .ಕಾರ್ಯದರ್ಶಿ ಶ್ರೀಮತಿ ಅರ್ಪಣ ಎಲ್ಲರನ್ನು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೃಷ್ಣಪ್ಪ ಕೆ. ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳ ಎಸ್. ಜಿ. ಗೌರವ ಸಲಹೆಗಾರರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ,
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ ಹನುಮಂತರಾಜು ಬಿ ಆರ್. ರಾಜ್ಯ ಸರ್ಕಾರಿ ನೌಕರರ ಸಂಘದ ತಾ ಕಾರ್ಯದರ್ಶಿ ಶ್ರೀ ದೇವರಾಜು, ಶಿಕ್ಷಕರ ಸಂಘದ ಪದಾಧಿಕಾರಿ ಶ್ರೀ ಹನುಮಂತರಾಜು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಾಗರಾಜು,ಮುಕುಂದಪ್ಪ, ರಂಗನಾಥ್, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಮಧುಗಿರಿ ಜಿಲ್ಲಾ ಘಟಕದ ಪ್ರಧಾನ  ಕಾರ್ಯದರ್ಶಿ ಶ್ರೀಮತಿ ಲತಾಮಣಿ, ಸಿರಾ ತಾಲೂಕಿನ ಪದಾಧಿಕಾರಿಗಳಾದ ಚಂದ್ರಕಲಾ, ಶಬನಾ, ಪ್ರೇಮಲೀಲಾ, ಸುಜಾತ, ಸೌಭಾಗ್ಯ, ಮಮತ,ಕುಬ್ರಾ ಬಾನು, ಮುಂತಾದ ವರು ಪಾಲ್ಗೊಂಡರು ಶ್ರೀಮತಿ ಶೃತಿ  ನಿರೂಪಿಸಿ ಕಾರ್ಯಕ್ರಮದ ಯಶಸ್ವಿಗೆ ಭಾಗವಸಿದ್ದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಸ್ಪಂದಿಸಿದ್ದ ಎಲ್ಲರಿಗೂ ವಂದಿಸಿದರು.

ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಮಾತೆಯ ಆದರ್ಶ ಪಾಲನೆ ಮಾಡಿದ ಫುಲೆ ಶಿಕ್ಷಕಿಯರು

ಹಾಸನ, ದಿ.14 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ( ರಿ) ತಾಲೂಕು ಘಟಕ ಹೊಳೆನರಸೀಪುರ ಮತ್ತು ಇತರ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ  “ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀಮತಿ ಕಾಂತಮಣಿ ಯವರು ಶ್ರೀ ಗಣೇಶನ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಹೊಳೆನರಸೀಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀಯುತ ಸೋಮಲಿಂಗೇಗೌಡ ರವರು ಹಾಗೂ ನೆರೆದ ಗಣ್ಯರಿಂದ ಗಿಡಕ್ಕೆ ನೀರು ಇರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಯುತ ಸೋಮಲಿಂಗೇಗೌಡ ರವರು ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ನಿಜವಾಗಲೂ ಒಂದು ಉತ್ತಮವಾದಂತಹ ಕಾರ್ಯಕ್ರಮ. ಇಂತಹ ಸಮಾಜಮುಖಿ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಮತ್ತು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮತ್ತೆ ಸಾವಿತ್ರಿಬಾಯಿ ಫುಲೆ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದು ತಿಳಿಸಿದರು. ಮತ್ತು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ರವರು ಸಂಘಕ್ಕೆ ಶುಭ ಕೋರುವುದರೊಂದಿಗೆ ತಮ್ಮ ಸಹಕಾರ ಸಂಘಕ್ಕೆ ಸದಾ ಇರುತ್ತದೆ ಎಂದು ತಿಳಿಸಿದರು ಮತ್ತು ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಆಶಾ ಆರ್ ಜಿಲ್ಲಾ ಸಾವಿತ್ರಿಬಾಯಿ ಸಂಘದ ಅಧ್ಯಕ್ಷರು,ಇಂತಹ ಒಂದು ವೇದಿಕೆಯನ್ನು ನಮ್ಮ ಹೆಮ್ಮೆಯ ನಾಯಕಿ,  ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ ಲತಾ ಎಸ್ ಮುಳ್ಳೂರ ರವರು ನಮಗೆ ನೀಡಿದ್ದಾರೆ, ಮಾತೆ ಸಾವಿತ್ರಿಬಾಯಿ ಫುಲೆ  ಅವರ ಆದರ್ಶಗಳನ್ನು ಪಾಲಿಸೋಣವೆಂದರು ಮತ್ತು ಸಂಘದ ಯಶಸ್ವಿಗೆ ಎಲ್ಲರ ಪರಿಶ್ರಮ ಬಹಳ ಮುಖ್ಯ ಎಂದು ತಿಳಿಸಿದರು.
ಪುನರ ಜೀವನ ಪ್ರಶ್ನ ಅಧ್ಯಕ್ಷರಾದಂತಹ ಶ್ರೀಯುತ ಭರತ್ ರವರು ಮಾತನಾಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದ ಮಹತ್ವವನ್ನು ತಿಳಿಸುವುದರೊಂದಿಗೆ ಆರೋಗ್ಯ ಕಾಳಜಿಯನ್ನು ವಹಿಸುವುದು ಬಹಳ ಮುಖ್ಯವೆಂದರು. ಹಾಗೆಯೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕರ ಸಂಘದ ಅಧ್ಯಕ್ಷರಾದಂತಹ ಶ್ರೀಮತಿ ಮಮತ ಕೆ .ಎಂ ರವರು
ನಮ್ಮ ಸಂಘದ ವತಿಯಿಂದ ಹಮ್ಮಿಕೊಂಡಿರುವ ಈ ಸಮಾಜಮುಖಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ತಾಲೂಕಿನ ಎಲ್ಲಾ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದರು ಹಾಗೆಯೇ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಭಾಗ್ಯ ವೆಂದರು ಅಕ್ಷರದ ಅವ ಮಾತೇ ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯ ಶೋಧಕಿ, ಆಧುನಿಕ ಶಿಕ್ಷಣದ ತಾಯಿ, ಅಕ್ಷರದ ದೀಪ ಹಿಡಿದು ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗ ಮಾತೆ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುತ್ತಾ ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಶಿಕ್ಷಣದ ಪ್ರಗತಿಗೆ ಎಲ್ಲರೂ ಶ್ರಮಿಸೋಣ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಲಿಂಗಪ್ಪ ರವರು ಮಹಿಳಾ ಶಿಕ್ಷಕಿಯರು ಕೈಗೊಂಡಿರುವ ಈ ಉತ್ತಮ ಕಾರ್ಯ ಸ್ವಾಗತ ಅರ್ಹವಾಗಿದೆ ಈ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದರೆ. ಈ ಕಾರ್ಯಕ್ರಮದಲ್ಲಿ ಮಲ್ಲರಾಜೇಡೌಡ ರವರು, ಶ್ರೀಯುತ ಶಿವಕುಮಾರಚಾರಿ ರವರು ತಾಲೂಕು ಪ್ರೌಢಶಾಲಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕರು, ಶ್ರೀಯುತ ಉಮೇಶ್ ರವರು ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷರು, ಶ್ರೀಯುತ ಗಣೇಶ್ ರವರು ಎನ್. ಪಿ .ಎಸ್ ನೌಕರರ ಸಂಘದ ಅಧ್ಯಕ್ಷರು. ಶ್ರೀಯುತ ರಂಗಸ್ವಾಮಿ ಎಂ.ಪಿ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷರು. ಹಾಗೂ ಸಾವಿತ್ರಿಬಾಯಿ ಫುಲೆ ಸಂಘದ ಗೌರವಾಧ್ಯಕ್ಷರಾದ ಸುವರ್ಣ, ಪ್ರಧಾನ ಕಾರ್ಯದರ್ಶಿಗಳಾದ ಬ್ರಮರಾಂಭ, ಖಜಂಚಿಗಳಾದ ಮಧುಮತಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು, ಸಾರ್ವಜನಿಕರು, ಆರೋಗ್ಯ ತಪಾಸಣೆಯ ಸದುಪಯೋಗ ಪಡೆಯುವುದರೊಂದಿಗೆ, ರಕ್ತದಾನ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀಮತಿ ಉಮಾದೇವಿಯವರ ಎಲ್ಲರನ್ನು ವಂದಿಸಿದರು.

ಶಿಕ್ಷಕಿಯರ ಸಂಘದ ವತಿಯಿಂದ ಹೃದಯ ತಪಾಸಣಾ ಶಿಬಿರ ಯಶಸ್ವಿ


ಮಧುಗಿರಿ/ಕೊರಟಗೆರೆ :
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಜಿಲ್ಲಾ ಘಟಕ ಮಧುಗಿರಿ ಮತ್ತು ತಾಲೂಕು ಘಟಕ ಕೊರಟಗೆರೆಯ ಸಂಯುಕ್ತ ಆಶ್ರಯದಲ್ಲಿ 05.12.2025 ರಂದು ಬೆಂಗಳೂರಿನ ಟ್ರಸ್ಟ್ ವೆಲ್ ಹಾಸ್ಪಿಟಲ್ ನಲ್ಲಿ ಶಿಕ್ಷಕರು ಮತ್ತು ಅವರ ಕುಟುಂಬದವರಿಗಾಗಿ ಹೃದಯದ ಸಂಪೂರ್ಣ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರದಲ್ಲಿ ಕೆಳಗಿನ ಪರೀಕ್ಷೆಗಳು ನಡೆಸಲಾಯಿತು:

CBC

Serum Creatinine (ಮೂತ್ರಪಿಂಡ ಕಾರ್ಯ ಪರೀಕ್ಷೆ)

Lipid Profile

RBS

ECG

BP

2D ECO Screening

Cardiac Consultancy

ಅನೇಕ ಶಿಕ್ಷಕರು ಹಾಗೂ ಅವರ ಕುಟುಂಬದವರು ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ.

ಶಿಬಿರಕ್ಕೆ ಬಂದ ಭಾಗವಹಿಸುವವರಿಗಾಗಿ ಸಂಘದ ವತಿಯಿಂದ ತಿಂಡಿ, ಊಟ ಮತ್ತು ಬಸ್ಸು ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಸುಜಾತ ಮ್ಯಾಡಂ, ಕಾರ್ಯದರ್ಶಿ ಆಶಾ, ಮತ್ತು ಸಂಘದ ಪದಾಧಿಕಾರಿಗಳಾದ ರೂಪ, ಮಂಜುಳಾ, ನೇತ್ರಾವತಿ, ಪುಟ್ಟಮ್ಮ, ಶೈಲಜಾ, ಗೌರವ ಸಲಹೆಗಾರರಾದ ಸಾಯಿರಾಬಾನು, ಶ್ರೀಮತಿ ಸುಜಾತ, ಲಲಿತ ಅವರು ಹಾಜರಿದ್ದರು.

ವಿಭಿನ್ನ ಕಾರಣಗಳಿಂದ ಕಾರ್ಯಕ್ರಮಕ್ಕಾಗಮಿಸಲು ಸಾಧ್ಯವಾಗದಿದ್ದರೂ ಸದಾ ಸಂಘದ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಮಾರ್ಗದರ್ಶನ ನೀಡುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರಾಧ್ಯಕ್ಷರು ಡಾ. ಲತಾ ಎಸ್. ಮುಳ್ಳೂರ ಅವರಿಗೆ ಸಂಘದ ವತಿಯಿಂದ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ

ಈ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದಂತಹ ಶ್ರೀಯುತ ಟ್ರಸ್ಟ್ ವೆಲ್ ಹಾಸ್ಪಿಟಲ್ ನ ನವೀನ್ ಕುಮಾರ್ ರವರಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹಾಗೂ

ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳು, ಶಿಕ್ಷಕರು, ಬಂಧು–ಮಿತ್ರರಿಗೆ ಸಂಘವು ಧನ್ಯವಾದಗಳನ್ನು ತಿಳಿಸಿದೆ.


ಲತಾ ಮುಳ್ಳೂರ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ

ಧಾರವಾಡ ಅಕ್ಟೋಬರ್.13.2025

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಧಾರವಾಡ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ್ ಅವರು ಇತ್ತೀಚೆಗೆ ಕೋಲಾರದ ಮಾಲೂರು ವ್ಯಾಪ್ತಿಯಲ್ಲಿ ಶಿಕ್ಷಕಿಯ ಮೇಲೆ ನಡೆದಿದ್ದ ಹಲ್ಲೆ ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಗೌರವಾನ್ವಿತ ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.


ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯರ ಮೇಲೆ ಆಗುವ ದೌರ್ಜನ್ಯವನ್ನು, ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ತರಗತಿಗಳಲ್ಲಿ ನಿರ್ಭೀತರಾಗಿ ತಮ್ಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಒಂದು ಸುಭದ್ರತೆಯ ವಾತಾವರಣವನ್ನು ಕಲ್ಪಿಸಿ ಕೊಡುವಂತಹ ಒಂದು ಕಾನೂನಾತ್ಮಕ ರಕ್ಷಣೆಯನ್ನು ಸರ್ಕಾರದ ಆದೇಶದ ಮೂಲಕ ಕಲ್ಪಿಸಬೇಕೆಂದು ಪತ್ರದಲ್ಲಿ ಕೋರಲಾಗಿತ್ತು

ಈ ಮನವಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರು ಗೌರವಾನ್ವಿತ ಶ್ರೀಮತಿ ನಾಗಲಕ್ಷ್ಮಿ ಚೌಧರಿ ರವರು ಇತೀಚೆಗೆ ಕೋಲಾರ ಮಾಲೂರಿನಲ್ಲಿ ನಡೆದಿದ್ದ ಶಿಕ್ಷಕಿಯ ಮೇಲಿನ ಹಲ್ಲೆ ಉಲ್ಲೇಖಿಸಿ ಅಂತಹ ಘಟನೆಗಳು ಮರುಕಳಿಸದಂತೆ ಶಾಲಾ ಶಿಕ್ಷಕಿಯರು ತಮ್ಮ ಕರ್ತವ್ಯವನ್ನು ಸುಭದ್ರತೆಯ ವಾತಾವರಣದಲ್ಲಿ ನಿರ್ವಹಿಸಲು ಕಾನೂನಾತ್ಮಕ ರಕ್ಷಣೆ ಒದಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಸ್ವಾಸ್ಥ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ಮಾಡುವ, ಗುರುಮಾತೆಯರಿಗೆ ರಕ್ಷಣೆ ಒದಗಿಸುವಲ್ಲಿ ಧನಾತ್ಮಕವಾಗಿ ಚಿಂತಿಸಿ, ಸಂಘಟನೆನೊಂದಿಗೆ ಸಹಕರಿಸುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಗೌರವಾನ್ವಿತ ಡಾ. ನಾಗಲಕ್ಷ್ಮಿ ಚೌದರಿ ಅವರಿಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ವು ಸಮಸ್ತ ಶಿಕ್ಷಕಿಯರ ಪರವಾಗಿ ತುಂಬು ಹೃದಯದ ಅನಂತ ಧನ್ಯವಾದಗಳನ್ನು ಸಲ್ಲಿಸಿದೆ.

ಹಲ್ಲೆಗೆ ಒಳಗಾದ ಶಿಕ್ಷಕಿಯ ಮನೆಗೆ ಭೇಟಿ – ದೈರ್ಯ ತುಂಬಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರು

ಕೋಲಾರ ಸೆ.14   ಇತ್ತೀಚೆಗೆ ಗ್ರಾಮದ ವ್ಯಕ್ತಿಯಿಂದ ಹಲ್ಲೆಗೆ ಒಳಗಾದ ಕೋಲಾರ ಜಿಲ್ಲೆ ಮಾಲೂರು ತಾ. ಕ್ಷೇತ್ರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಮಂಜುಳಾ ಅವರ ಮನೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಶಿಕ್ಷಕಿಯ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.

ಸಂಘಟನೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರೂ ಆದ. ಲತಾ ಎಸ್ ಮುಳ್ಳೂರ ರವರ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ  ರಾಜ್ಯ ಹಿರಿಯ ಪದಾಧಿಕಾರಿಗಳಾದ ತುಮಕೂರಿನ ಶ್ರೀಮತಿ ಅನುಸೂಯಾದೇವಿ ಹಾಗು ರಾಜ್ಯ ಸಹಕಾರ್ಯದರ್ಶಿ  ಕೋಲಾರದ ಶ್ರೀಮತಿ ಮಮತಾ ಆರ್  ಇವರ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ  ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷಮ್ಮ  ಕಾರ್ಯದರ್ಶಿ ಶ್ರೀಮತಿ ನಾಗವೇಣಿ ಬಿವಿ  ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರು ಶ್ರೀಮತಿ ರಾಜ ರಾಜೇಶ್ವರಿ ಹಾಗು ಸ.ಕಾರ್ಯದರ್ಶಿ ಕೀರ್ತಿ ಬಸಪ್ಪ ಲಗಳಿ. ಸಂ.ಕಾರ್ಯದರ್ಶಿ ರಾಜೇಶ್ವರಿ BA ಮಾಲೂರು ತಾಲೂಕ್ ಘಟಕ ಅಧ್ಯಕ್ಷರು ಶ್ರೀಮತಿ ಮಾಲತಿ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷರು ಶ್ರೀಮತಿ ರಾಜೇಶ್ವರಿ D, ಕಾರ್ಯದರ್ಶಿ ಶ್ರೀಮತಿ ಗೀತಾ MP ,ಉಪಾಧ್ಯಕ್ಷರು ಶ್ರೀಮತಿ ಶಶಿಕಲಾ ಎಂ, ಮತ್ತು ಲಕ್ಮೀದೇವಮ್ಮ v ,ತುಮಕೂರು ತಾ ಕೋಶದ್ಯಕ್ಷೆ ಶ್ರೀಮತಿ ಲೋಕಮ್ಮ R ಹಾಗೂ ಕೋಲಾರ ಪದಾಧಿಕಾರಿಗಳಾದ ಶ್ರೀಮತಿ ಸುನಂದಮ್ಮ, ಮಂಜುಳಾ ಎಂ, ಸುಶೀಲಮ್ಮ ಎಂ, ನೀಲಮ್ಮ ಇತರೆ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.

ದೌರ್ಜನ್ಯಕ್ಕೊಳಗಾದ ಶ್ರೀಮತಿ ಮಂಜುಳಾ ಅವರೊಂದಿಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ದೂರವಾಣಿ ಮೂಲಕ ಮಾತನಾಡಿ  ಸಾಂತ್ವನ ಹೇಳಿ ಧೈರ್ಯ ಹೇಳಿದರು,. ನಡೆದ ಘಟನೆಯ ವಿವರಣೆ ಪಡೆದು. ಕರ್ತವ್ಯನಿರತ ಸರ್ಕಾರಿ ಶಿಕ್ಷಕಿಯ ಮೇಲೆ  ಹಲ್ಲೆ ನಡೆದಿರುವುದು ಘೋರ ಅಪರಾಧವೇ ಸರಿ, ಇದರ ಸಂಬಂಧ ರಾಜ್ಯ ಮಹಿಳಾ ಆಯೋಗದ  ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದ್ದು ಮಾನ್ಯ ಅಧ್ಯಕ್ಷರು ಇದನ್ನು ತೀವ್ರವಾಗಿ ಖಂಡಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ,ಆರೋಪಿ ಬಂಧನ ಆಗಬೇಕು, ತಕ್ಕ ಶಿಕ್ಷೆ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ. ರಾಜ್ಯ ಹಿರಿಯ ಉಪಾಧ್ಯಕ್ಷರು ಅನುಸೂಯದೇವಿ ಮಾತನಾಡಿ ಇಂದು ಭಾನುವಾರ ರಜೆಯ ದಿನ  ಮನೆಯ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಎಲ್ಲರೂ ತಮ್ಮ ಅಮೂಲ್ಯ ಸಮಯ ನೀಡಿ ದೂರದಿಂದ ಬಂದು ಹಲ್ಲೆಗೆ ಒಳಗಾದ ಶಿಕ್ಷಕಿಗೆ ನ್ಯಾಯ ಒದಗಿಸಲು ಎಲ್ಲರೂ ಕೈಜೋಡಿಸಿದ್ದು ಸಂತಸ ತಂದಿದೆ. ನಮ್ಮ ಸಂಘ ನಮ್ಮ ಹೆಮ್ಮೆ ನಮ್ಮ ಒಗ್ಗಟ್ಟು ಹೀಗೆ ಮುಂದುವರೆಯಬೇಕು ,ರಾಜ್ಯದ ಯಾವುದೇ ಶಿಕ್ಷಕಿಯರಿಗೆ ಅನ್ಯಾಯ ಆಗಲು ನಾವು ಬಿಡಬಾರದು ಎಂದು ಕೋಲಾರ ಘಟನೆಯನ್ನು ಖಂಡಿಸಿ ಮಾತನಾಡಿದರು.  ತುಮಕೂರು. ಚಿಕ್ಕಬಳ್ಳಾಪುರ.ಬಾಗೇಪಲ್ಲಿ. ಮಾಲೂರು. ಬಂಗಾರಪೇಟೆ. ಕೋಲಾರದಿಂದ ಆಗಮಿಸಿದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

ವೈದ್ಯಕೀಯ ದಿನಾಚರಣೆ ಆಚರಿಸಿದ ಕ.ಸಾ.ಬಾ.ಫುಲೆ ಶಿಕ್ಷಕಿಯರು

ಚನ್ನಪಟ್ಟಣ ಜು.27.ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ರಿ. ನವದೆಹಲಿ ಕೇಂದ್ರ ಕಚೇರಿ ಧಾರವಾಡ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ರಿ. ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ),ತಾಲೂಕು ಘಟಕ ಚನ್ನಪಟ್ಟಣದ ವತಿಯಿಂದ ಶನಿವಾರದಂದು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹದಲ್ಲಿ ವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಶ್ರೀಮತಿ ಡಾ. ಜ್ಯೋತಿ ಅವರನ್ನು ವೈದ್ಯ ನಾರಾಯಣ ಹರಿ ಎಂಬ ಮಾತಿನಂತೆ ತಾಯಿ ಮಗುವಿಗೆ ಜನ್ಮ ಮರುಜನ್ಮ ನೀಡುವ ದೇವರ ಪ್ರತಿರೂಪರೆಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮತ್ತೋರ್ವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಗೀತಾಂಜಲಿ ಅವರು ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೀಟಾ ಮನು ಗೌಡರವರು ಶ್ರೀಮತಿ ಸಾಕಮ್ಮ ರವರು ಶ್ರೀಮತಿ ಉಷಾರಾಣಿಯವರು ಚನ್ನಪಟ್ಟಣ ತಾಲೂಕು ಅಧ್ಯಕ್ಷರಾದ ಶ್ರೀಮತಿ ನಾಗಮ್ಮನವರು ಪದಾಧಿಕಾರಿಗಳಾದ ಭಾಗ್ಯಮ್ಮ ವಿಜಿಯಮ್ಮ ಅನ್ನಪೂರ್ಣಮ್ಮ ನವರು ಉಪಸ್ಥಿತರಿದ್ದರು . ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ದೈಹಿಕ ಶಿಕ್ಷಕರಾದ ಶಿವಕುಮಾರ್ ರವರು , ಗೀತ ಗಾಯಕರಾದ ಶ್ರೀ ಬೇವೂರು ರಾಮಯ್ಯನವರು ಮಲೆಯ ಮಹದೇಶ್ವರ ಟ್ರಸ್ಟ್ ಕಲಾತಂಡದ ಕಲಾವಿದರಾದ ಮಹದೇವಯ್ಯ ಹಾಗೂ ಶ್ರೀಯುತ ಸಿದ್ದರಾಜುರವರು ಅಕ್ಷರ ದಾಸೋಹದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ರವರು ಉಪಸ್ಥಿತರಿದ್ದರು.

ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ವಾಗತಿಸಿದ ಕೊರಟಗೆರೆ ಕ.ಸಾಭಾಫು.ಶಿಕ್ಷಕಿಯರು.

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ.), ಧಾರವಾಡ — ಜಿಲ್ಲಾ ಘಟಕ: ಮಧುಗಿರಿ, ತಾಲೂಕು ಘಟಕ: ಕೊರಟಗೆರೆ

ದಿನಾಂಕ 05.07.2025 (ಶನಿವಾರ)ರಂದು ಶಾಲಾ ಅವಧಿಯ ನಂತರ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ತಾಲೂಕಿಗೆ ನೂತನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ  ಆಗಮಿಸಿರುವ ಶ್ರೀಮತಿ ಫೈರೋಜ್ ಬೇಗಂ ಅವರಿಗೆ ಅಭಿನಂದಿಸಿ ಸ್ವಾಗತ ಕೋರಲಾಯಿತು.

ಸರಳ ಸಜ್ಜನಿಕೆಯಿಂದ ಕೂಡಿರುವ ಶ್ರೀಮತಿ ಫೈರೋಜ್ ಬೇಗಂ ಅವರು ಸಂತಸದಿಂದ ಮಾತನಾಡುತ್ತಾ, ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಾವೆಲ್ಲರೂ ನಿಷ್ಠೆಯಿಂದ ಕೆಲಸ ಮಾಡೋಣ, ಅಂತೆಯೇ ಶಿಕ್ಷಕರ ಶಿಕ್ಷಕಿಯರ ಹಿತವು ನನಗೆ ಪ್ರಮುಖವಾಗಿದ್ದು ಅದಕ್ಕಾಗಿ ನನ್ನ ಸಹಕಾರ ಸದಾ ನಿಮ್ಮಗಳ ಮೇಲೆ ಇರುತ್ತದೆ ಎಂದು ತಿಳಿಸಿದರು.
ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಪುಲೆ ಅವರನ್ನು ಹೆಮ್ಮೆಯಿಂದ ಸ್ಮರಿಸಿದರು.
“ಎಲ್ಲರೂ ಸಮಯಪಾಲನೆ ಮಾಡುತ್ತಾ ಮಕ್ಕಳ ಗುಣಾತ್ಮಕ ಶಿಕ್ಷಣದತ್ತ ಗಮನ ಹರಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೆಲಸ ಕಡಿಮೆಯಾಗುತ್ತದೆ” ಎಂದರು.
ಇದಲ್ಲದೆ, “ಶಿಕ್ಷಕರು ಸಂತೋಷದಾಯಕ ವಾತಾವರಣದಲ್ಲಿ ಮಕ್ಕಳಿಗೆ ಅನ್ಯಾಯವಾಗದಂತೆ ಕೆಲಸ ನಿರ್ವಹಿಸಬೇಕು” ಎಂಬ ಸಲಹೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಜಿ. ಎಲ್. ರಾಧಮ್ಮ ಮಾತನಾಡುತ್ತಾ, ಸಂಘದ ಸಂಸ್ಥಾಪಕಿ ಡಾ. ಲತಾ ಎಸ್. ಮುಳ್ಳೂರ ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವುದಾಗಿ ಹೇಳಿದರು.
“ಶಾಲಾ ಕಾರ್ಯಕ್ಕೆ ತೊಂದರೆ ಆಗದಂತೆ, ಶಾಲಾ ಅವಧಿಯ ನಂತರ ಸಂಘದ ಚಟುವಟಿಕೆಗಳನ್ನು ಕೈಗೊಂಡಿದ್ದೇವೆ. ನಮ್ಮ ಮೊದಲ ಆದ್ಯತೆ ಮಕ್ಕಳ ಗುಣಾತ್ಮಕ ಶಿಕ್ಷಣವಾಗಿದೆ” ಎಂದು ವಿವರಿಸಿದರು.

ಇದುವರೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು:

ಹೃದಯ ತಪಾಸಣಾ ಶಿಬಿರ

ವೀರಯೋಧರಿಗೆ ಸನ್ಮಾನ

ನಿವೃತ್ತಿ ಶಿಕ್ಷಕರಿಗೆ ಸನ್ಮಾನ

ರಕ್ತದಾನ ಶಿಬಿರ

ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಭೇಟಿ

ಶೈಕ್ಷಣಿಕ ವೆಬಿನಾರ್‌ಗಳು

ಇವೆಲ್ಲಾ ಸಂಘದ ನಮ್ಮ  ಜಿಲ್ಲಾ ಘಟಕದ ಬಲಿಷ್ಠತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷೆ ಶ್ರೀಮತಿ ಸುಜಾತ ಜಿ. ಅವರು ಮಾತನಾಡಿ, “ಸಮಯಪಾಲನೆ ಶಿಕ್ಷಕರ ಶಿಸ್ತುಪೂರ್ಣತೆ ಮತ್ತು ಸೇವಾ ಮನೋಭಾವಕ್ಕೆ ಪ್ರತಿಬಿಂಬವಾಗಿರುತ್ತದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಆಶಾರಾಣಿ, ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಜಿ., ಶ್ರೀಮತಿ ನಾಗಮಣಿ, ಶ್ರೀಮತಿ ರೂಪಾ, ಶ್ರೀಮತಿ ನಾಗರತ್ನಾ, ಶ್ರೀಮತಿ ಸರೋಜಾ ಮತ್ತಿತರರು ಉಪಸ್ಥಿತರಿದ್ದರು.