ರಾಮನಗರ.jul.26. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಿ ರಾಜ್ಯ ಘಟಕ ಧಾರವಾಡ, ಜಿಲ್ಲಘಟಕ ರಾಮನಗರ ವತಿಯಿಂದ ಹಾಗೂ ತಾಲೂಕು ಘಟಕಗಳಾದ ಕನಕಪುರ, ರಾಮನಗರ, ಚನ್ನಪಟ್ಟಣದ ಸಹಯೋಗದೊಂದಿಗೆ, ದಿನಾಂಕ 25-07-2026ರ ಶನಿವಾರ ಮಧ್ಯಾನ್ಹ 2 ಗಂಟೆಗೆ ಸರಿಯಾಗಿ ರಾಮನಗರ ತಾಲೂಕಿನ ಕೃಷ್ಣಪುರ ದೊಡ್ಡಿ ಗ್ರಾಮದಲ್ಲಿ ಇರುವ ದಾರಿದೀಪ ವೃದ್ಧಾಶ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆ, ವೃದ್ಧರ ದಿನಾಚರಣೆ, ಹಾಗೂ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು .


ಈ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಫೆಡರೇಶನ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಭಾವತಿ ರವರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಮನಗರ ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀಮತಿ ಶೋಭಾರವರು ರಾಮನಗರ ಜಿಲ್ಲಾಧ್ಯಕ್ಷರಾದ
ರೀಟಾ ಮನುಗೌಡ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಲಲಿತಾರವರು ಜಿಲ್ಲಾ ಜಿ ಪಿ ಟಿ ಮುಖ್ಯಸ್ಥರಾದ ಭವ್ಯರವರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ದೀಪ ರವರು ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರಾದ ನಾಗಮ್ಮ ರವರು ರಾಮನಗರ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಯೋಗಿತಾರವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಪ್ರಭಾಕರವರು ಡಾ. ಧರಣೇಶ್ ಅವರು ಉಪನ್ಯಾಸಕರಾದ ಗಂಗಾಧರ್ ರವರು ದಾರಿ ದೀಪ ಟ್ರಸ್ಟ್ ಸಂಸ್ಥಾಪಕರಾದ ಶ್ರೀಮತಿ ಕವಿತಾ ರಾವ್ ಅವರು ಅಕ್ಷರ ಫೌಂಡೇಶನ್ ಕಾರ್ಯಕರ್ತರಾದ ಸಂಧ್ಯಾ ರವರು ಹಾಗೂ ದಾರಿದೀಪ ವೃದ್ಧಾಶ್ರಮದಲ್ಲಿರುವ 60 ಜನ ಹಿರಿಯ ವಯೋವೃದ್ದರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರಾಮನಗರ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಯೋಗಿತಾರವರಿಂದ ನಿರೂಪಣೆ ಆರಂಭವಾಗಿ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ರವರು ಪ್ರಾರ್ಥನೆಯನ್ನು ಹಾಡಿದರು ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಭಾವತಿ ರವರು ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು ನಂತರ ಆಶ್ರಮದ ಹಿರಿಯರಿಂದ ಸಸಿಗೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಂತರ ದಾರಿದೀಪ ಟ್ರಸ್ಟ್ ನ ಸಂಸ್ಥಾಪಕರಾದ ಕವಿತಾ ರಾವ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ವೈದ್ಯರ ದಿನಾಚರಣೆಯ ಅಂಗವಾಗಿ ಡಾಕ್ಟರ್ ಧರಣೇಶ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಡಾಕ್ಟರ್ ದಿನೇಶ್ ಪ್ರಸಾದ್ ರವರು ವೃದ್ಧರಿಗೆ ಕೆಲವು ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಮಾರ್ಗದರ್ಶನವನ್ನು ನೀಡಿ ಅವರನ್ನು ತಪಾಸಣೆ ಮಾಡಿದರು ನಂತರ ರಾಮನಗರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಪ್ರಭಾಕರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಂಘದ ಬಗೆಗೆ ಹೆಮ್ಮೆಯ ವಿಚಾರಗಳನ್ನು ಅಭಿವ್ಯಕ್ತಪಡಿಸಿದರು ನಂತರ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೀಟಾ ಮನು ಗೌಡರವರು ಭಜನಾ ಗೀತೆಯನ್ನು ಹಾಡಿದರು ನಂತರ ಉಪನ್ಯಾಸಕರಾದ ಗಂಗಾಧರ್ ರವರು ಹಿರಿಯರಿಗೆ ಆರೋಗ್ಯಕರ ಜೀವನಕ್ಕೆ ಬೇಕಾದ ಮಾರ್ಗದರ್ಶನಗಳನ್ನು ನೀಡಿದರು ನಂತರ ಅನಿತಾ ರಾವ್ ಅವರನ್ನು ,ಡಾಕ್ಟರ್ ಧರಣೇಶ್ ಅವರನ್ನು ಶ್ರೀಯುತ ಪ್ರಭಾಕರ್ ಅವರನ್ನು ಉಪನ್ಯಾಸಕರಾದ ಗಂಗಾಧರ್ ರವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸರ್ವರನ್ನು ಸನ್ಮಾನಿಸಲು ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಲಲಿತಾ ರವರು ನೆರವು ನೀಡಿದರು ರಾಮನಗರ ಜಿಲ್ಲೆಯ ಗೌರವಾಧ್ಯಕ್ಷರಾದ ಶೋಭಾ ಮೇಡಂ ರವರು ವಂದನಾರ್ಪಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

ಪರಿಸರ ದಿನಾಚರಣೆಯ ಅಂಗವಾಗಿ ಪಪ್ಪಾಯಿ ಕರಿಬೇವು ಸೀತಾಫಲ ಹಾಗೂ ನುಗ್ಗೆಕಾಯಿ ಸಸಿಗಳನ್ನು ಆಶ್ರಮದಲ್ಲಿ ನೀಡಲಾಯಿತು. ದಿನಸಿ ತರಕಾರಿ ಹಣ್ಣು ಬಿಸ್ಕೆಟ್ ಬ್ರೇಡ್ ರಸ್ಕ್ ಮಿಕ್ಸ್ಚೆರ್ ಇತ್ಯಾದಿಗಳನ್ನು ಆಶ್ರಮಕ್ಕೆ ವಿತರಿಸಲಾಯಿತು. ಸರ್ವರಿ ಗೂ ಶ್ರೀಯುತ ಪ್ರಭಾಕರ್ ಅವರು ಭೋಜನ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಕಾರಣಕರ್ತರಾದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿ ಹಿರಿಯರಿಂದ ಆಶೀರ್ವಾದವನ್ನು ಪಡೆಯಲಾಯಿತು. ಒಟ್ಟಾರೆಯಾಗಿ ಇಂದಿನ ಈ ಕಾರ್ಯಕ್ರಮವು ಇಷ್ಟು ಅಚ್ಚುಕಟ್ಟಾಗಿ ನೆರವೇರಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಸರ್ವ ಮಾನ್ಯರಿಗೂ ತುಂಬು ಹೃದಯದ ಅನಂತ ಅನಂತ ಧನ್ಯವಾದಗಳನ್ನು ಜಿಲ್ಲಾ ಸಂಘಟನೆ ಸಲ್ಲಿಸಿದೆ



































